ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು
ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್ಯವೋ, ಸಂಸಾರಕ್ಕೆ ಹೆಣ್ಣು ಅಷ್ಟೇ ಮುಖ್ಯ ಎಂಬುದು ಈ ಗಾದೆಯ ಹೇಳಿಕೆ.
2.ಭರಣಿ ಮಳೆಗೆ ಬಿತ್ತಿದರೆ ಧರಣಿಯಲ್ಲಿ ಧಾನ್ಯ
ಭರಣಿ ಮಳೆ ಬಂದಾಗ ಬಿತ್ತನೆ ಮಾಡಿದರೆ ಫಸಲು ಖಂಡಿತ ಬರುವುದು ಎಂಬುದು ರೈತರ ನಂಬಿಕೆ. ಅಂದರೆ ಇಲ್ಲಿ ರೈತನು ಭರಣಿ ಮಳೆ ಬರುವುದನ್ನೇ ಕಾಯುತ್ತ, ಬಂದ ಕೂಡಲೇ ಮುಂಗಾರು ಮಳೆಗೆ ಬೀಜ ಬಿತ್ತಲು ಸಿದ್ಧತೆ ಮಾಡಿಕೊಂಡಿರಬೇಕಾಗುತ್ತದೆ. ಈ ಗಾದೆ ಅವನಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟಿರುತ್ತದೆ.
3.ಆರಿದ್ರೆ ಮಳೆ ಗುಡುಗಿದರೆ ಆರು ಮಳೆ ಬರುವುದಿಲ್ಲ
ಈ ಗಾದೆ ರೈತನ ನಂಬಿಕೆಯಾಗಿದೆ. ಮಳೆ ಗುಡುಗಿದರೆ ರೈತ ಕಂಗಾಲಾಗುತ್ತಾನೆ. ಬರಗಾಲ ಬರುತ್ತದೇನೋ ಎಂದು ಗಾಬರಿಯಾಗುತ್ತಾನೆ. ಈ ಮಳೆ ಗುಡಗದಿರಲಿ ಎಂದು ಹಾರೈಸುತ್ತಾನೆ. ಏಕೆಂದರೆ ಮಳೆಯನ್ನೇ ಅವಲಂಬಿಸಿರುವರ ರೈತರಿಗೆ ಮಳೆ ಮತ್ತು ಮಳೆಯಿಂದ ಬೆಳೆಯುವ ಧಾನ್ಯಗಳೇ ಜೀವನಾಧಾರಗಳಾಗಿವೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

No comments:

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">