ಗಾದೆಗಳು ಮತ್ತು ಅದರ ಸಾರಾಂಶ-3

1.ಕಳ್ಳನಿಗೊಂದು ಪಿಳ್ಳೆ ನೆವ ಮಳ್ಳಿಗೊಂದು ಮಗುವಿನ ನೆವ
ಈ ಗಾದೆಯಲ್ಲಿ ಕಳ್ಳನು ಏನಾದರೂ ಒಂದು ಕಾರಣ ಹೇಳಿ ಕಳ್ಳತನ ನಡೆದ ಜಾಗದಿಂದ ಪರಾರಿಯಾಗುತ್ತಾನೆ. ಅದೇ ರೀತಿ ಹೆಂಗಸೊಬ್ಬಳು ತನ್ನ ಮಗು ಅಳುತ್ತಿದೆ ಎಂದು ಕಾರಣ ಹೇಳಿ ಕೆಲಸದಿಂದ ತಪ್ಪಿಸಿಕೊಂಡು ಹೋಗುತ್ತಾಳೆ. ಅವಳಿಗೆ ಕೆಲಸ ಮಾಡುವ ಮನಸ್ಸಿರುವುದಿಲ್ಲ ಅದಕೊಂದು ನೆಪಬೇಕು. ಆ ನೆಪ ತನ್ನ ಮಗುವಿನ ರೂಪದಲ್ಲಿ ಸಿಗುತ್ತದೆ. ಕೆಲಸ ಮಡದ ಸೋಮಾರಿಗಳನ್ನು ಕುರಿತು ಈ ಗಾದೆ ಹೇಳಲಾಗಿದೆ. ಸೋಮಾರಿಗಳಿಗೆ ಕೆಲಸ ಮಾಡದಿರುವುದಕ್ಕೆ ನೂರಾರು ಕಾರಣಗಳು ಸಿಗುತ್ತವೆ. ಅಂಥ ಕಾರಣಗಳನ್ನು ಅವರು ಸೃಷ್ಟಿಸಿಕೊಳ್ಳುತ್ತಾರೆ.
2.ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ
ಈ ಗಾದೆಯಲ್ಲಿ ಸೊಸೆಯ ಅಸಹಾಯಕತೆಯನ್ನು ಹೇಳಲಾಗಿದೆ. ಅತ್ತೆಯ ಕೆಲವು ನಡವಳಿಕೆಗಳಿಂದ ಸೊಸೆಗೆ ಅತ್ತೆಯ ಮೇಲೆ ಸಿಟ್ಟು ಬರುತ್ತದೆ. ಆದರೆ ಮನೆಗೆ ಯಜಮಾನಿಯಾದ ಅತ್ತೆಯನ್ನು ಬಯ್ಯುವಂತಿಲ್ಲ. ಆದ್ದರಿಂದ ಅವಳು ಕಂಡುಕೊಂಡ ಉಪಾಯವೆಂದರೆ, ಮನೆಯಲ್ಲಿ ಸಾಕಿದ ಬೆಕ್ಕಿಗೆ ಒಂದೇಟು ಹಾಕುತ್ತಾಳೆ. ಆಗ ಅವಳಿಗೆ ಸಮಧಾನವಾಗುತ್ತದೆ. ಈ ರೀತಿ ಅವಳು ಅತ್ತೆಯ ಮೇಲಿನ ಸಿಟ್ಟನ್ನು ಬೆಕ್ಕಿಗೆ ಹೊಡೆಯುವುದರ ಮೂಲಕ ತೀರಿಸಿಕೊಳ್ಳುತ್ತಾಳೆ.
3.ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆ ಮೇಲು
ಈ ಗಾದೆಯಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ತಿಳಿಸಿದೆ. ಮೇಟಿ ವಿದ್ಯೆ ಅಂದರೆ ಬೇಸಾಯ ಮನುಷ್ಯನ ಜೀವನಾಧಾರವಾದ ಕಸುಬಾಗಿದೆ. ರೈತ ಬೆಳೆಯದಿದ್ದರೆ ಸಮಾಜದ ಇತರ ಕಸುಬು ಮಾಡುವ ಜನರೂ ಉಪವಾಸ ಸಾಯಬೇಕಾಗುತ್ತದೆ. ದುಡ್ಡು ತಿನ್ನಲು ಬರುವುದಿಲ್ಲ. ದುಡ್ಡಿಗೆ ಕೊಳ್ಳುವ ಶಕ್ತಿ ಇರುವುದಧಾದರೂ ಕೊಳ್ಳಲು ಧಾನ್ಯವೇ ಇಲ್ಲದಿದ್ದರೆ ಗತಿಯೇನು? ಹಾಗಾಗಿಯೇ ಇಲ್ಲಿ ಬೇಸಾಯದ ಮಹತ್ವವನ್ನು ಒತ್ತಿ ಹೇಳಿದೆ. "ಮೇಟಿ ವಿದ್ಯೆ" ಇಲ್ಲಿರುವ ಮೇಟಿ ಎಂಬ ಪದದ ಅರ್ಥ ಹುಲ್ಲು ತುಳಿಸುವ ಕಣದಲ್ಲಿರುವ ಮೇಟಿ ಎಂದು. ಮೇಟಿ ಯನ್ನು ಕಣದ ಮಧ್ಯಭಾಗದಲ್ಲಿ ನೆಟ್ಟಿರುತ್ತಾರೆ. ಮೇಟಿಯ ಸುತ್ತಲೂ ಹಗ್ಗದಿಂದ ಕಟ್ಟಿರುವ ಎತ್ತುಗಳನ್ನು ತಿರಿಗಿಸುತ್ತಾರೆ. ಈ ರೀತಿ ಎತ್ತುಗಳ ಕಾಲ್ತುಳಿತಕ್ಕೆ ಸಿಕ್ಕಿದ ರಾಗಿ ತೆನೆಯಲ್ಲಿನ ರಾಗಿ ತೆನೆಯಿಂದ ಪ್ರತ್ಯೇಕಗೊಳ್ಳುತ್ತದೆ. ರಾಗಿ ತುಳಿಸುವ ಈ ದೃಶ್ಯವನ್ನು ರೈತರು ಸುಗ್ಗಿ ಕಾಲದಲ್ಲಿ ಕಣಗಳಲ್ಲಿ ಕೆಲಸ ಮಾಡುವಾಗ ಕಾಣಬಹುದು. ಹಾಗಾಗಿ ಮೇಟಿ ವಿದ್ಯೆ ಎಂದರೆ ಬೇಸಾಯ ಎಂದು ಅರ್ಥಮಾಡಿಕೊಳ್ಳಬೇಕು.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

No comments:

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">