ಗಾದೆಗಳು ಮತ್ತು ಅದರ ಸಾರಾಂಶ-10

1.ಗಂಡಹೆಂಡಿರ ಜಗಳ ಉಂಡು ಮಲಗುವ ತನಕ
ಈ ಗಾದೆಯಲ್ಲಿ ಗಂಡು ಹೆಣ್ಣಿನ ಸಂಬಂಧ ಬಿಡಿಸಲಾಗದ ಬಂಧ ಎಂಬುದನ್ನು ಹೇಳಿದೆ. ಗಂಡ - ಹೆಂಡತಿ ಎಷ್ಟೇ ಜಗಳವಾಡಿದರೂ ಕಡೆಯಲ್ಲಿ ಪರಸ್ಪರ ಹೊಂದಿಕೊಂಡು ಹೋಗಬೇಕು. ಗಂಡ - ಹೆಂಡಿರ ಜಗಳ ತಾತ್ಕಾಲಿಕ ಸ್ವರೂಪದಾಗಿರಬೇಕು. ಅವರಿಬ್ಬರೂ ಒಟ್ಟಿಗೆ ಬಾಳುವುದು ಅನಿವಾರ್ಯ. ಅವರು ವಿವಾಹವೆಂಬ ಪವಿತ್ರ ಬಂಧನದಲ್ಲಿ ಬಂಧಿತರಾಗಿದ್ದಾರೆ. ಹಾಗಾಗಿಯೇ ಅವರು ಎಷ್ಟೇ ಜಗಳವಾಡಿದರೂ ಕಡೆಯಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬಾಳಬೇಕು ಎಂಬುದು ಈ ಗಾದೆಯ ಆಶಯ. ಇಲ್ಲಿ ಗಂಡ ಹೆಂಡತಿ ನಡುವೆ ನಂಬಿಕೆ ಇರಬೇಕಾದ್ದು ಬಹಳ ಮುಖ್ಯವಾದದ್ದು. ನಂಬಿಕೆ ಇಲ್ಲದ ಮೇಲೆ ಆ ಸಂಸಾರಕ್ಕೆ ಅರ್ಥವೇ ಇರುವುದಿಲ್ಲ.
2.ಹೆತ್ತವರಿಗೆ ಹೆಗ್ಗಣ ಮುದ್ದು ಕೂಡಿದವರಿಗೆ ಕೋಡಗ ಮುದ್ದು
ಈ ಗಾದೆಯಲ್ಲಿ ಪ್ರೀತಿಯ ಮಹತ್ವವನ್ನು ಹೇಳಿದೆ. ಪ್ರೀತಿಸುವ ಗಂಡು - ಹೆಂಡಿರ ಮಧ್ಯೆ ರೂಪ ಅಡ್ಡ ಬರುವುದಿಲ್ಲ. ಹೆಂಡತಿ ಕುರೂಪಿಯಾಗಿದ್ದರೂ ಸಹ ಪ್ರೀತಿಸುವ ಗಂಡನ ಪಾಲಿಗೆ ಅವಳು ರತಿಯೇ ಸೈ. ಬೇರೆಯವರ ದೃಷ್ಟಿಯಲ್ಲಿ ಅವಳು ಕೋಡಗದಂತೆ ಕಾಣುತ್ತಿದ್ದರೂ ಪ್ರೀತಿಸುವ ಗಂಡನ ಪಾಲಿಗೆ ಅವಳು ಸುರ ಸುಂದರಿಯಾಗಿಯೇ ಕಾಣುತ್ತಾಳೆ. ಪ್ರೀತಿಯ ಮಹತ್ವವೇ ಅಂಥದು. ಇದೇ ರೀತಿ ಹೆತ್ತವರಿಗೆ ತಮ್ಮ ಮಕ್ಕಳು ಕುರೂಪಿಗಳಾಗಿದ್ದರೂ ಅವರಿಗೆ ಸುಂದರವಾಗಿಯೇ ಕಾಣುತ್ತಿರುತ್ತಾರೆ. ಕಾರಣ ತಮ್ಮ ಮಕ್ಕಳ ಮೇಲೆ ಪಾಲಕರಿಗೆ ಇರುವ ಅತಿಯಾದ ಮಮತೆ ಮತ್ತು ಪ್ರೀತಿ.
3.ಶಿವರಾತ್ರಿಗೆ ಸೀಳುಗಾಯಿ: ಯುಗಾದಿಗೆ ಹುಳಿಗಾಯಿ
ಈ ಗಾದೆಯಲ್ಲಿ ಮಾವಿನ ಮರ ಫಸಲು ಬಿಡುವ ರೀತಿಯನ್ನು ತಿಳಿಸಿದೆ. ಶಿವರಾತ್ರಿ ಹಬ್ಬದ ಹೊತ್ತಿಗೆ ಮಾವಿನಕಾಯಿ ಸೀಳುಗಾಯಿ ಅಂದರೆ ಹೀಚುಗಾಯಿಗಳಾಗಿರುತ್ತವೆ. ಯುಗಾದಿ ಹಬ್ಬದ ಸಮಯಕ್ಕೆ ಹೂವಿನ ಕಾಯಿ ಹುಳಿಗಾಯಿ ಎಂದರೆ ಹುಳಿ ತುಂಬಿದ ಕಾಯಿಗಳಾಗಿರುತ್ತವೆ. ಎಂಬುದು ಇದರ ಅರ್ಥ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

No comments:

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">