ಗಾದೆಗಳು ಮತ್ತು ಅದರ ಸಾರಾಂಶ-7

1.ಉಂಡು ಹೋದ ಕೊಂಡು ಹೋದ
ಸಹಾಯ ಮಾಡಿದವನಿಗೆ ನಷ್ಟ ಮಾಡುವವನನ್ನು ಕುರಿತ ಗಾದೆ ಇದು. ಇಲ್ಲಿ ಒಬ್ಬ ವ್ಯಕ್ತಿಯನ್ನು ಊಟಕ್ಕೆ ಕರೆದರೆ, ಅವನು ಊಟಮಾಡಿ ಗಂಭೀರವಾಗಿ ಮನೆಗೆ ಹೋಗಬೇಕು ತಾನೆ? ಆದರೆ ಅವನು ಹಾಗೆ ಮಾಡದೆ, ಜೊತೆಗೆ ಆ ಮನೆಯ ವಸ್ತುಗಳನ್ನು ಕದ್ದು ತೆಗೆದುಕೊಂಡು ಹೋಗುತ್ತಾನೆ. ಅಂದರೆ ಸಹಾಯ ಪಡೆದ ವ್ಯಕ್ತಿಯೊಬ್ಬ ಸಹಾಯ ಮಾಡಿದ ವ್ಯಕ್ತಿಗೆ ಇನ್ನೂ ಹೆಚ್ಚಿನ ಕಷ್ಟ ಉಂಟುಮಾಡುತ್ತಾನೆ. ಅಂಥ ಸಂದರ್ಭದಲ್ಲಿ ಈ ಗಾದೆ ಬಳಕೆಗೆ ಬಂದಿದೆ.
2.ಹಾಗಲಕಾಯಿಗೆ ಬೇಲಿ ಸಾಕ್ಷಿ
ಕಳ್ಳನು ಕಳ್ಳನ ಪರ ಸಾಕ್ಷಿ ಹೇಳುವುದರ ಕುರಿತ ಗಾದೆ ಇದು. ಹಾಗಲು ಬಳ್ಳಿ ಬೇಲಿಯ ಮೇಲೆ ಬೆಳೆದು ಹಬ್ಬಿ ಹಾಗಲು ಕಾಯಿಗಳನ್ನು ಬಿಟ್ಟಿರುತ್ತದೆ. ಅದು ಯಾವಾಗಲೂ ಬೇಲಿಯ ಆಶ್ರಯದಲ್ಲಿ ಇರುತ್ತದೆ. ಹಾಗಾಗಿ ಅದು ಸಾಕ್ಷಿಗಾಗಿ ಬೇಲಿಯನ್ನೇ ತೋರಿಸುತ್ತದೆ. ಏಕೆಂದರೆ ಬೇಲಿ ಯಾವತ್ತೂ ಹಾಗಲ ಕಾಯಿಯ ಪರವಾಗಿಯೇ ಸಾಕ್ಷಿ ಹೇಳುತ್ತದೆ. ಅದೇ ರೀತಿ ಮನುಷ್ಯನು ತನಗೆ ಬೇಕಾದವರಿಂದಲೇ ಸಾಕ್ಷಿ ಹೇಳಿಸುತ್ತಾನೆ. ಅಲ್ಲಿಗೆ ಸಾಕ್ಷಿ ಹೇಳುವವನು ತನ್ನಂಥವನೇ ಆಗಿರುತ್ತಾನೆ. ಕಳ್ಳನು ಕಳ್ಳನ ಪರ ಸಾಕ್ಷಿ ಹೇಳಿದಂತೆ. ಇಂಥ ಸಂದರ್ಭದಲ್ಲಿ ಈ ಗಾದೆ ಬಳಕೆಯಾಗಿದೆ.
3.ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
ಅವಶ್ಯಕತೆ ಇಲ್ಲದ ವಸ್ತುಗಳಗೆ ಪ್ರಾಮುಖ್ಯತೆ ನೀಡುವ ಕುರಿತ ಗಾದೆ ಇದು. ಇದರ ಅರ್ಥವು ಸರಳವಾಗಿದೆ. ಅವಶ್ಯಕತೆ ಇರುವ ವಸ್ತುಗಳಿಗಿಂತ ಅವಶ್ಯಕತೆ ಇಲ್ಲದ ವಸ್ತುಗಳಿಗೆ ಕೆಲವರು ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

No comments:

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">