ಗಾದೆಗಳು ಮತ್ತು ಅದರ ಸಾರಾಂಶ-8

1.ಎಮ್ಮೆ ಬೆಣ್ಣೆ ಎಮ್ಮೆ ಕಣ್ಣಿಗೆ ಸಾಲುವುದಿಲ್ಲ
ಅಲ್ಪ ಆದಾಯ ಕುರಿತ ಗಾದೆ ಇದು. ದುಡಿಯುವ ಒಬ್ಬ ಗಂಡಸಿನ ವರಮಾನ ಅವನ ಸ್ವಂತ ಖರ್ಚಿಗೆ ಸಾಲುವುದಿಲ್ಲ. ಅವನು ಮನೆ ಖರ್ಚಿಗೆ ಹಣವನ್ನೇ ಕೊಡುವುದಿಲ್ಲ. ಅವನ ದುಡೀಮೆ ಅವನಿಗೆ ಸಾಲದಿರುವಾಗ ಹೆಂಡತಿ ಮಕ್ಕಳನ್ನು ಹೇಗೆ ಸಾಕುತ್ತಾನೆ? ಇಂಥ ಸಂದರ್ಭದಲ್ಲಿ ಈ ಗಾದೆ ಬಳಕೆಗೆ ಬಂದಿದೆ.
2.ಮನೆಗೆ ಮಾರಿ ಊರಿಗೆ ಉಪಕಾರಿ
ವಿವೇಕ ಇಲ್ಲದವನ ಕುರಿತ ಗಾದೆ ಇದು. ಒಬ್ಬನು ಊರಿನ ಜನರಿಗೆಲ್ಲ ಸಹಾಯ ಮಾಡುತ್ತಿರುತ್ತಾನೆ. ಆದರೆ ತನ್ನ ಮನೆಯವರಿಗಾಗಿ ಏನೂ ದುಡಿಯುವುದಿಲ್ಲ. ಮೊದಲು ತನ್ನ ಮನೆಯ ಯೋಗಕ್ಷೇಮ ನೋಡಿಕೊಂಡು ನಂತರ ಊರಿನವರ ಯೋಗಕ್ಷೇಮ ನೋಡಿಕೊಳ್ಳಬೇಕು ಎಂಬುದು ಈ ಗಾದೆಯ ಆಶಯ.
3.ಸಮುದ್ರಕ್ಕೆ ನೀರು ಸುರಿದ ಹಾಗೆ
ಸಮುದ್ರಕ್ಕೆ ಎಷ್ಟೇ ನೀರು ಸುರಿದರೂ ಅದರ ಮಟ್ಟ ಒಂದು ಅಗಲವೂ ಜಾಸ್ತಿಯಾಗುವುದಿಲ್ಲ. ಅಂದರೆ ವ್ಯರ್ಥ ಶ್ರಮ. ಯಾವುದೇ ಒಂದು ಕೆಲಸ ನಿರರ್ಥಕವೆಂದು ತಿಳಿಸುವಾಗ ಈ ಗಾದೆ ಬಳಸುತ್ತಾರೆ.
4.ಜೀನನ ಒಡವೆ ಜಾಣ ತಿಂದ
ಈ ಗಾದೆಯಲ್ಲಿ ಜಿಪುಣನಾದ ಒಬ್ಬ ವ್ಯಕ್ತಿ ತನ್ನ ಜೀವಮಾನವಿಡೀ ದುಡಿದು ದುಡಿದು ಹಣ ಕೂಡಿಡುತ್ತಾನೆ. ಆದರೆ ತನ್ನ ಸ್ವಂತ ಸುಖಕ್ಕಾಗಿ ಸ್ವಲ್ಪವೂ ಖರ್ಚು ಮಾಡುವುದಿಲ್ಲ. ಇಂಥವರ ಹಣವನ್ನು ಜಾಣರಾದ ವ್ಯಕ್ತಿಗಳು ಉಪಯೋಗಿಸಿಕೊಂಡು ಸುಖ ಪಡುತ್ತಾರೆ. ಇಂಥ ಜಿಪುಣರನ್ನು ಕುರಿತು ಈ ಗಾದೆ ಸೃಷ್ಟಿಯಾಗಿದೆ. ಅಂದರೆ ಮನುಷ್ಯ ದುಂದುವೆಚ್ಚ ಇದರ ಅರ್ಥವಲ್ಲ. ತಾನು ದುಡಿದ ಹಣದಲ್ಲಿ ತಾನು ಸುಖವಾಗಿದ್ದು ತನ್ನ ಮಕ್ಕಳು ಮರಿಗಳಿಗೂ ಸಾಕಷ್ಟು ಉಳಿಸಿ ಹೋಗಬೇಕು ಎಂಬುದು ಈ ಗಾದೆಯ ಆಶಯ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

No comments:

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">