ಗಾದೆಗಳು ಮತ್ತು ಅದರ ಸಾರಾಂಶ-9

1.ಕಾಸಿದ್ರೆ ಕೈಲಾಸ
ಈ ಗಾದೆಯು ಹಣದ ಮಹತ್ವವನ್ನು ಹೇಳುತ್ತದೆ. ಹಣವಿದ್ದರೆ ತನಗೆ ಬೇಕಾದುದೆಲ್ಲವನ್ನು ಪಡೆದುಕೊಂಡು ಸುಖವಾಗಿರಬಹುದೆಂಬುದೇ ಈ ಗಾದೆಯ ಆಶಯ. ಹಣವಿಲ್ಲದಿದ್ದರೆ ಜೀವನವೇ ಕಷ್ಟವಾಗುತ್ತದೆ. ಆದ್ದರಿಂದಲೇ ಕಷ್ಟಪಟ್ಟು ಹಣ ಸಂಪಾದನೆ ಮಾಡಬೇಕು. ಇದರಿಂದ ಸೋಮಿರಿಗೆ ಬದುಕೇ ಭಾರ ಎಂಬ ಗಾದೆ ಬಳಕೆಗೆ ಬಂದಿದೆ.
2.ಒಲಿದರೆ ನಾರಿ ಮುನಿದರೆ ಮಾರಿ
ಗಂಡನಾದವನು ಹೆಂಡತಿಯನ್ನು ಒಲಿಸಿಕೊಂಡು ಸಂಸಾರ ಮಾಡಿದರೆ ಆ ಮನೆ ಸ್ವರ್ಗಸಮಾನವಾಗಿರುತ್ತದೆ. ಹಾಗಲ್ಲದೆ ಹೆಣ್ಣನ್ನು ಪದೇ ಪದೇ ಹೀಯಾಳಿಸುತ್ತಾ ಅವಳನ್ನು ಸಿಟ್ಟಿಗೆಬ್ಬಿಸಿದರೆ, ಆ ಮನೆ ನರಕವಾಗುತ್ತದೆ. ಅಂದರೆ ಗಂಡ-ಹೆಂಡಿರ ಮಧ್ಯೆ ಪ್ರೀತಿ ಇರಬೇಕಾದ್ದು ಮುಖ್ಯ ಎಂಬುದು ಈ ಗಾದೆಯ ಆಶಯ. ಹಾಗಿಲ್ಲದಿದ್ದರೆ ಹೆಂಡತಿಗೆ ಸಿಟ್ಟು ಬಂದರೆ ಅವಳು ಮಾರಿಯ ಅವತಾರ ತಾಳಿ ಇಡೀ ಸಂಸಾರವನ್ನೇ ನಾಶ ಮಾಡುತ್ತಾಳೆ ಎನ್ನುವುದು ಈ ಗಾದೆಯ ಅರ್ಥ.
3.ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಅತ್ತೆಯು ತಾನು ಪ್ರಬಲಳಾಗಿರುವವರೆಗೂ ಸೊಸೆಯನ್ನು ತನ್ನ ಅಂಕೆಯಲ್ಲಿ ಇಟ್ಟುಕೊಂಡಿರುತ್ತಾಳೆ. ಆಗ ಸೊಸೆ ಅತ್ತೆ ಹೇಳಿದ ಹಾಗೆ ಕೇಳಿಕೊಂಡು ಇರುತ್ತಾಳೆ. ಆದರೆ ವಯಸ್ಸಿನ ಕಾರಣದಿಂದ ಅತ್ತೆ ದುರ್ಬಲಳಾದಾಗ ಸೊಸೆ ಅತ್ತೆಯನ್ನು ಮೂಲೆಗೆ ತಳ್ಳಿ ತಾನು ಅಧಿಕಾರ ವಹಿಸಿಕೊಳ್ಳುತ್ತಾಳೆ. ಆಗ ಅತ್ತೆ ಸೊಸೆ ಹೇಳಿದ ಹಾಗೆ ಕೇಳಿಕೊಂಡಿರಬೇಕಾಗುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಎಲ್ಲರಿಗೂ ಒಂದೊಂದು ಕಾಲ ಬರುತ್ತದೆ ಎನ್ನುವ ಅರ್ಥದಲ್ಲಿ ಈ ಗಾದೆ ಬಳಸುತ್ತಾರೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

No comments:

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">