ಗಾದೆಗಳು ಮತ್ತು ಅದರ ಸಾರಾಂಶ-1

ಗಾದೆಗಳು ಜನಮಾನಸದಲ್ಲಿ ಸ್ಥಾಯಿಯಾಗಿ ನಿಂತ ಅನುಭವದ ನುಡಿಗಳು. ಅವು ಮನುಷ್ಯರ ನೂರಾರು ವರ್ಷಗಳ ಅನುಭವದ ಆಧಾರದಲ್ಲಿ ನಿರ್ಮಿತವಾದ ನುಡಿಗಟ್ಟುಗಳು. ಹಾಗಾಗಿ ಇವುಗಳಲ್ಲಿರುವ ಹೇಳಿಕೆಗಳು ಸತ್ಯವೆಂದೇ ಜನ ಪರಿಗಣಿಸುತ್ತಾರೆ.

1.ಚಿಂತೆಯೇ ಮುಪ್ಪು ಸಂತೋಷವೇ ಯೌವನ

ಕನ್ನಡ ಜನಪದ ಸಾಹಿತ್ಯದ ಬಹು ಮುಖ್ಯ ಪ್ರಕಾರಗಳ ಲೊಂದು. ಗಾದೆ ಎಂಬ ಪದ ಸಂಸ್ಕ್ರತದ ಗಾಥಾ ನೇರ ತದ್ಭವವಾಗಿರಬಹುದು. ಗಾದೆಗೆ ಸಂವಾದಿಯಾಗಿ ಸಾಮತಿ, ಸೂಕ್ತಿ, ಲೋಕೋಕ್ತಿ, ಸಾರೋಕ್ತಿ, ನಾಣ್ಣುಡಿ ಮುಂತಾದ ಪದಗಳು ಬಳಕೆಯಲ್ಲಿದ್ದರೂ ಗಾದೆ ಶಬ್ದವೇ ಹೆಚ್ಚು ಪ್ರಚಾರದಲ್ಲಿದೆ. ಚಿಂತೆಯು ಆಯುಷ್ಯವನ್ನು ತಿನ್ನುತ್ತದೆ ಎನ್ನುವ ಮಾತಿನಂತೆ ಮಾನಸಿಕ ಚಿಂತೆ ಮನುಷ್ಯರಿಗೆ ಅಕಾಲದ ಮುಪ್ಪನ್ನು ತರುತ್ತದೆ. ಚಿಂತೆಗೂ ಚಿತೆಗೂ ವ್ಯತ್ಯಾಸ ಸೊನ್ನೆ. ಆದರೆ ಚಿಂತೆ ಬದುಕಿದವರನ್ನು ಸುಟ್ಟರೆ, ಚಿತೆ ಜೀವ ಇಲ್ಲದ ವಸ್ತುವನ್ನು ಸುಡುತ್ತದೆ. ಚಿಂತೆಯು ನಮ್ಮ ಮನಸ್ಸಿನ ಸಂತೋಷವನ್ನು ಹಾಳುಮಾಡುತ್ತದೆ. ಮನುಷ್ಯನನ್ನು ನಿರುತ್ಸಾಹಿಯಾಗಿ ಮಾಡಿ, ದುಡಿಯುವ ಶಕ್ತಿ, ಚೈತನ್ಯವನ್ನು ಕುಗ್ಗಿಸುತ್ತದೆ. ಚಿಂತಿಸುತ್ತಾ ಹೋದರೆ ಅದು ನಮ್ಮ ಆಯುಷ್ಯವನ್ನು ತಿಂದು ಅಕಾಲ ವೃದ್ಧಾಪ್ಯವನ್ನುಂಟುಮಾಡಿ ಬದುಕನ್ನು ನಶ್ವರಗೊಳಿಸುತ್ತದೆ. ಆದ್ದರಿಂದ ಚಿಂತಿಸುವುದನ್ನು ಬಿಟ್ಟು ಬದುಕಿರುವಷ್ಷು ಕಾಲ ಸುಖ ಸಂತೋಷದಿಂದ ಜೀವನವನ್ನು ಕಳೆಯಬೇಕು. ಮನಸ್ಸಿನ ಸಂತೋಷ ವೃದ್ಧನಲ್ಲೂ ಯೌವನವನ್ನು ಮೂಡಿಸುತ್ತದೆ. ಶಕ್ತಿಯನ್ನು ತುಂಬುತ್ತದೆ. ಯಾರ ಬದುಕಿನಲ್ಲಿ ಸಂತೋಷ ಇರುವುದೋ ಅವರು ಆರೋಗ್ಯದಿಂದ ಬಾಳುತ್ತಾರೆ. ಬದುಕಬೇಕು, ಸಾಧಿಸಬೇಕು, ಗೆಲ್ಲಬೇಕು ಎಂಬ ಛಲವನ್ನು ಹೊಂದಿರುತ್ತಾರೆ. ಆದ್ದರಿಂದ ನಾವು ನಗುನಗುತಾ ಸಂತೋಷ ದಿಂದ ಬಾಳಬೇಕು. ಚಿಂತೆಯಿಂದ ದೂರ ಇರಬೇಕು. ಸಂತೋಷವು ಯೌವನಾವಸ್ಥೆಯ ಸಾಮರ್ಥ್ಯವನ್ನು ತಂದು ಕೊಡುತ್ತದೆ.

2.ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ

ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿಸದು. ಉಪ್ಪು ಎಲ್ಲಾ ಪಾಕ ವೈವಿಧ್ಯಗಳಿಗೂ ಪ್ರಧಾನ. ಅದೇ ರೀತಿ ತಾಯಿಯೂ ಕೂಡ. ಉಪ್ಪಿಲ್ಲದಿದ್ದರೆ ಊಟ ಹೇಗೆ ರುಚಿಸುವುದಿಲ್ಲವೋ, ಅದೇ ರೀತಿ ತಾಯಿ ಇರದಿದ್ದರೆ ಜೀವನವೇ ಅಂಧಕಾರವಗಿರುವುದು. ತಾಯಿ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಗುರುವಿದ್ದಂತೆ, ಅಡುಗೆಗೆ ಬಳಸುವ ಸಾಸಿವೆ, ಜೀರಿಗೆ ಮೆಂತ್ಯ, ಕೊತ್ತಂಬರಿ ಇತ್ಯಾದಿ ವಸ್ತುಗಳು ಬೇರೆ ಬೇರೆ ರುಚಿಯನ್ನು ಕೊಡುವುದಿಲ್ಲ. ಹಾಗೆಯೇ ಮನೆಯಲ್ಲಿ ತಂದೆ, ಅಣ್ಣ, ಅಕ್ಕ ತಂಗಿ, ಮಾವ ಮುಂತಾಗಿ ನಾನಾ ರೀತಿಯ ಬಂಧುಗಳಿದ್ದರೂ ತಾಯಿಯಷ್ಟು ಮಿಗಿಲಾದ ಬಂಧುಗಳಿಲ್ಲ. ಆದ್ದರಿಂದಲೇ ಜನಪದ ತ್ರಿಪದಿಯಲ್ಲಿ ಗರತಿ ಯಾರೂ ಆದರೂ ಹೆತ್ತ ತಾಯಂತೆ ಆದರೋ ಸಾವಿರ ಸೌದೆಒಲೆಯಲ್ಲಿ ಉರಿದಾರೂ ದೀವಿಗೆಯಂತೆ ಬೆಳಕುಂಟೆ. ಎಂದು ತಾಯಿ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ. ಹೆತ್ತ ತಾಯಿ ದೇವರು ನಮಗೆ ನೀಡಿರುವ ಅಮೂಲ್ಯ ಆಸ್ತಿ. ಆ ಆಸ್ತಿಯನ್ನು ಜೋಪಾನವಾಗಿ ಕಾಪಾಡಬೇಕಾದದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ. ಎಂಥಹ ಕಷ್ಟ ಬಂದರೂ ಇತರ ಬಂಧುಗಳು ನಮ್ಮಿಂದ ದೂರವಾದರೂ ನಮ್ಮನ್ನು ಅವಳು ಕೈಬಿಡಳು. ಆದ್ದರಿಂದ ತಾಯಿಗಿಂತ ಬಂಧುವಿಲ್ಲ. ಎಂಬ ಮಾತು ಅಕ್ಷರಶಃ ಅರ್ಥವತ್ತಾದುದಾಗಿದೆ.

3.ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಕುಂಬಾರ

ಒಂದು ಮಡಕೆ ಮಾಡಬೇಕಾದರೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾನೆ. ಕೆರೆಯಿಂದ ಜೇಡಿಮಣ್ಣು ತಂದು ಅದನ್ನು ಹದಮಾಡಿ, ತಟ್ಟಿ, ಮಡಕೆಯನ್ನು ಮಾಡಿ, ಅದನ್ನು ಒಣಗಿಸಿ, ಬೇಯಿಸಿ ನಂತರ ಮಾರಾಟ ಮಾಡುತ್ತಾನೆ. ಆದರೆ ಒಬ್ಬ ವ್ಯಕ್ತಿ ಒಂದೇ ನಿಮಿಷದಲ್ಲಿ ಒಂದು ದೊಣ್ಣೆಯಿಂದ ಮಡಕೆಗಳನ್ನು ಒಡೆದು ಹಾಕಬಹುದು. ಅಂದರೆ ಯಾವುದೇ ವಸ್ತುವನ್ನು ಸೃಷ್ಟಿ ಮಾಡುವುದು ಕಷ್ಟ ಆದರೆ ಅದನ್ನು ನಾಶ ಮಾಡುವುದು ಸುಲಭ. ಅದೇ ರೀತಿ ಒಂದು ಕಾರ್ಯವನ್ನು ಮಾಡಿಮುಗಿಸುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಆದರೆ ಆ ಕಾರ್ಯವನ್ನು ಕೆಡಿಸುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ಅರ್ಥದಲ್ಲಿ ಈ ಗಾದೆ ಬಳಕೆಯಲ್ಲಿದೆ.

ರಿಂದ,
ನಿರ್ವಾಹಕ
(ಒಗಟು ಗಾದೆಗಳ ಪುಟ)

1 comment:

Unknown said...

Please send more proverb ex:ದೇಶ ಸುತ್ತಿ ನೋಡು ಕೋಶ ಓದಿ ನೋಡು & adakege ಓದ ಮಾನ ಆನೆ ಕೊಟ್ಟರು ಬಾರದು old explain it ����

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">